ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇ ಬೇಕು.- ಶಾಸಕ ರಮೇಶ ಜಾರಕಿಹೊಳಿ.!

Nov 29, 2024 - 17:16
 93
Facebook Join WhatsApp Join Telegram Live

ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇ ಬೇಕು.- ಶಾಸಕ ರಮೇಶ ಜಾರಕಿಹೊಳಿ.!

Yuva Vahini - News Desk.

ಗೋಕಾಕ: ವಿದ್ಯಾರ್ಥಿ ಜೀವನದಿಂದ ರಾಜಕಾರ ಮಾಡುತ್ತ ಬಂದಿದ್ದು ೨೫ ವರ್ಷದಿಂದ ಶಾಸಕನಾಗಿದ್ದೇನೆ. ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇ ಬೇಕು. ಅದು ನನ್ನ ಸ್ವಭಾವ ರೇಬಲ್ ಅನ್ನೊದೆ ನನಗೆ ಸಚಿವ ಸ್ಥಾನವಿದ್ದಂತೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.


   ಅವರು, ಶುಕ್ರವಾರದಂದು ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿದ ರಾಜಋಷಿ ಶ್ರೀ ಭಗೀರಥರ ಮೂರ್ತಿ ಅನಾವರಣ ಕಮೀಟಿಯವರು ಆಯೋಜಿಸಿದ್ಧ ಶ್ರೀ ಭಗೀರಥ ಮೂರ್ತಿ ಲೋಕಾರ್ಪಣೆಗೊಳಿಸಿ, ಜಗದ್ಗರು ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ನನಗೆ ಕಾಂಗ್ರೆಸ್ ಪಕ್ಷದಲ್ಲೂ ಅನ್ಯಾಯ ಆಗಿದೆ. ಬಿಜೆಪಿ ಕೆಲ ಮುಖಂಡರಿAದಲೂ ಅನ್ಯಾಯವಾಗಿದೆ. ನನ್ನದು ಹೋರಾಟದ ಬದುಕು. ಹಿಂದುಳಿದ ಜನಾಂಗಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಹಿಂದುಳಿದ ಜನಾಂಗ ಸುಮಾರು ೭೦ಪ್ರತಿಶತಕ್ಕಿಂತ ಹೆಚ್ಚಿದ್ದು ಅವರಿಗೆ ಸೀಗಬೇಕಾದ ಮೀಸಲಾತಿ ಸೀಗುತ್ತಿಲ್ಲ. ಅದರ ಬಗ್ಗೆ ಈಗಾಗಲೇ ಶ್ರೀಗಳ ಸಮ್ಮುಖದಲ್ಲಿ ಚರ್ಚಿಸಿದ್ದೇನೆ. ಅವರೆಲ್ಲರ ಮಾರ್ಗದರ್ಶನ ಪಡೆದು ಬೃಹತ್ ಹೋರಾಟ ಆಯೋಜಿಸಲಾಗುವದು ಎಂದರು.


   ವಿರೋಧ ಪಕ್ಷದಲ್ಲಿದ್ದಾಗ ಬೇರೆ ಮಾತಾಡುತ್ತಾರೆ. ಅಧಿಕಾರಕ್ಕೆ ಬಂದಾಗ ಮಾತನಾಡಿದ್ದನ್ನು ಕಾರ್ಯರೂಪಕ್ಕೆ ತರುವದಿಲ್ಲ. ನಾವು ನೋಡಿದ ಒಳ್ಳೆಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು, ಅವರಂತೆ ನಾನು ನುಡಿದಂತೆ ನಡೆಯುತ್ತಿದ್ದೇನೆ. ಹಿಂದುಳಿದ ವರ್ಗಗಳು ಎಸ್‌ಟಿಗೆ ಸೇರಲು ಅರ್ಹತೆ ಹೊಂದಿವೆ ಎಸ್‌ಟಿಗೆ ಸೇರಲು ನಾವು ವಿರೋಧ ಮಾಡಲ್ಲ. ಈಗಿರುವ ಮೀಸಲಾತಿಯನ್ನು ಹೆಚ್ಚಳ ಮಾಡುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು. ಹೊಸದುರ್ಗದ ಪುರುಷೋತ್ತಮಾನಂದ ಶ್ರೀಗಳು ಹಾಗೂ ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಸೇರಿ ಹಿಂದುಳಿದ ವರ್ಗಗಳ ಮಠಾಧೀಶರು ಸಂಕಷ್ಟ ಸಮಯದಲ್ಲಿ ನನ್ನ ಮನೆಗೆ ಬಂದು ಸಂತೈಸುವ ಕೇಲಸ ಮಾಡಿದರು. ಆಗ ಎಲ್ಲ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿ ನಾನು ಹೆದರುವದಿಲ್ಲ ಎಂದು ಹೇಳಿದೆ. ಹಿಂದುಳಿದವರಿಗೆ ಅನ್ಯಾಯವಾಗಲು ಯಾವತ್ತೂ ಬಿಡುವದಿಲ್ಲ ನಾನು ಹೋರಾಟದ ಮೂಲಕ ಹಿಂದುಳಿದ ೧೫ಲಕ್ಷಕ್ಕೂ ಜನರನ್ನು ಸೇರಿಸಿ ಪ್ರತಿಭಟಿಸುವೆ ಎಂದು ಹೇಳಿದರು.


   ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹೊಸದುರ್ಗ ಬ್ರಹ್ಮ ವಿದ್ಯಾನಗರ ಶ್ರೀ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತ ಬಂದಿರುವ ಜಾರಕಿಹೊಳಿ ಸಹೋದರರು ಗೋಕಾಕ ನಗರದಲ್ಲಿ ಎಲ್ಲ ಸಮುದಾಯಗಳ ಮಾಹಾತ್ಮರ ವೃತ್ತಗಳಲ್ಲಿ ಪುತ್ಥಳಿಗಳನ್ನ ಸ್ಥಾಪಿಸಿದ್ದಾರೆ. ಅದರಂತೆ ಗೋಕಾಕ ನಗರದ ಹೆಬ್ಬಾಗಿಲಿನಂತಿರುವ ಮಾಲದಿನ್ನಿ ಕ್ರಾಸನಲ್ಲಿ ಭಗೀರಥ ಪುತ್ಥಳಿ ಲೋಕಾರ್ಪಣೆ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಮೇಲೆ ಅತಿವ ಪ್ರೀತಿಯನ್ನು ಹೊಂದಿರುವ ಅವರು ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಮಾಡಲು ಮುಂದಾಗಿದ್ದು ಸಂತಸದ ವಿಷಯ. ಅವರ ಹೋರಾಟಕ್ಕೆ ನಾವು ಬೆನ್ನು ಕೊಡಲು ಸದಾ ಸಿದ್ಧರಿದ್ದೇವೆ. ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿರುವ ಜಾರಕಿಹೊಳಿ ಕುಟುಂಬದ ಶಕ್ತಿ ರಾಜ್ಯಕ್ಕೆ ಗೊತ್ತಿದೆ. ರಾಜ್ಯವನ್ನು ಆಳಲು ಸಮರ್ಥರಾಗಿದ್ದಾರೆ. ಅವರಲ್ಲಿ ರಮೇಶ್ ಜಾರಕಿಹೊಳಿ ಹೋರಾಟಗಾರ ಅವರ ಹೋರಾಟಕ್ಕೆ ಯಾವತ್ತೂ ಗೆಲುವಿದೆ. ಅವರ ಕುಟುಂಬ ಸದಸ್ಯರು ಅತಿಶೀಘ್ರದಲ್ಲೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದರು.


   ಸಾನಿಧ್ಯ ವಹಿಸಿದ್ಧ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಸಮಾಜದ ಸಂಘಟನೆಗೆ ರಾಜ್ಯದಾದ್ಯಂತ ಸಂಚರಿಸಿ ಸಮಾಜದ ಅಭಿವೃದ್ಧಿಗೆ ಡಾ.ಪುರುಷೋತ್ತಮಾನಂದಪುರಿ ಶ್ರೀಗಳು ಶ್ರಮಿಸುತ್ತಿದ್ದಾರೆ. ಉಪ್ಪಿನ ಮಹತ್ವವನ್ನು ಸಾರಿದ ಸಮಾಜ ಉಪ್ಪಾರ ಸಮಾಜ. ಈ ಸಮಾಜದ ಆರ್ಥಿಕ, ಸಮಾಜಿಕ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಬೇಕಿದೆ ಎಂದರು.
    ಸಾನಿಧ್ಯ ವಹಿಸಿದ್ಧ ಅಂಕಲಗಿ-ಕುAದರಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಸ್ವಾಮಿಜಿ ಮಾತನಾಡಿ, ಗೋಕಾಕ ಜಿಲ್ಲೆಯನ್ನಾಗಿ ಮಾಡಲು ಜಾರಕಿಹೊಳಿ ಸಹೋದರರು ಶ್ರಮಿಸುತ್ತಿದ್ದಾರೆ. ಈ ಗೋಕಾವಿ ನಗರಕ್ಕೆ ಬರಲು ಮಾಲದಿನ್ನಿ ಕ್ರಾಸ್ ಹೆಬ್ಬಾಗಿಲು ಈ ಹೆಬ್ಬಾಗಲ ಬಳಿ ಪವಿತ್ರ ಗಂಗೆಯನ್ನು ಧರೆಗಿಳಿಸಿದ ರಾಜಋಷಿ ಶ್ರೀ ಭಗೀರಥರ ಪುತ್ಥಳಿಯನ್ನು ಸ್ಥಾಪಿಸಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಭಗೀರಥರ ದರ್ಶನ ಭಾಗ್ಯ ಕಲ್ಪಿಸಿದ್ದಾರೆ ಎಂದು ಹೇಳಿದರು. 


    ಅಥಣಿಯ ಕವಲಗುಡ್ಡದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಉಪ್ಪಾರಹಟ್ಟಿಯ ಶ್ರೀ ನಾಗೇಶ್ವರ ಮಹಾಸ್ವಾಮಿಗಳು ಮಾತನಾಡಿದರು.


   ವೇದಿಕೆಯ ಮೇಲೆ ಹೂಲಿಕಟ್ಟಿಯ ಶ್ರೀ ಶಿವಲಿಂಗೇಶ್ವರ ಕುಮಾರ ದೇವರು, ಕಟಕಭಾಂವಿಯ ಶ್ರೀ ಅಭಿನವ ಧರೇಶ್ವರ ಮಹಾಸ್ವಾಮಿಗಳು, ಮಾಲದಿನ್ನಿಯ ಶ್ರೀ ಅಡವಿಸಿದ್ಧೇಶ್ವರ ಮಹಾಸ್ವಾಮಿಗಳು, ಯುವಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಕಾರ್ಯನಿರತ ಪತ್ರಕರ್ತರ ಸಂಘ ಗೌರವಾಧ್ಯಕ್ಷ ಹಾಗೂ ಯುವನಾಯಕ ಸರ್ವೋತ್ತಮ ಜಾರಕಿಹೊಳಿ ಉಪಸ್ಥಿತರಿದ್ದರು.


   ಶಾಮಾನಂದ ಪೂಜೇರಿ ಸ್ವಾಗತಿಸಿದರು. ಎ ಜಿ ಕೋಳಿ ನಿರೂಪಿಸಿದರು. ಪರಸಪ್ಪ ಬಬಲಿ ವಂದಿಸಿದರು.

Join WhatsApp Join Facebook Live Join Telegram

Tags: